ಸಧ್ಯದಲ್ಲೇ ನಿಮ್ಮ ಮುಂದೆ ವಿಶ್ವವಿಜಯ ವಿನಾಯಕ
Posted date: 24/September/2010

ಇತ್ತೀಚಿನ ವರ್ಷಗಳಲ್ಲಿ ಭಕ್ತಿ ಪ್ರಧಾನ ಚಿತ್ರಗಳು ಕಣ್ಮರೆಯಾಗುತ್ತಿರುವ ಸಂದರ್ಭದಲ್ಲಿ ಭಕ್ತಿ ಪ್ರಧಾನ ಚಿತ್ರವೊಂದು ಸಮಗದ್ದಲವಿಲ್ಲದೆ ಶೇಕಡ ೮೦% ರಷ್ಟು ಚಿತ್ರೀಕರಣ ಮುಗಿಸಿದೆ.  ಶ್ರೀ ಶಬರಿಮಲೈ ಸ್ವಾಮಿ ಅಯ್ಯಪ್ಪ, ಶಿವಮಣಿ ಕಂಠಣ ಮಹಿಮೆ, ಮುಂತಾದ ಭಕ್ತಿಪ್ರಧಾನ ಚಿತ್ರಗಳನ್ನು ವಿ.ಎಸ್.ಎನ್. ಪ್ರೊಡಕ್ಷನ್  ಲಾಂಛನದಡಿಯಲ್ಲಿ ವಿ. ಸ್ವಾಮಿನಾಥನ್ ವಿಶ್ವ ವಿಜಯ ವಿನಾಯಕ ಎಂಬ ಮತ್ತೊಂದು ಚಿತ್ರವನ್ನು ನಿರ್ಮಿಸಿ ನಿರ್ದೇಶಿಸುತ್ತಿದ್ದಾರೆ.  

    ಚಿತ್ರಕ್ಕೆ ಅಬ್ಬಾಯಿ ನಾಯ್ಡು ಸ್ಟುಡಿಯೋ ಅಭಿಮಾನ್ ಸ್ಟುಡಿಯೋಗಳಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಅದ್ದೂರಿ ಸೆಟ್‌ಗಳನ್ನು ನಿರ್ಮಿಸಿ ಬಹುತೇಕ ಚಿತ್ರೀಕರಣ ಮುಗಿಸಿರುವ ಸ್ವಾಮಿನಾಥನ್ ಕೆಲವೊಂದು ಸನ್ನಿವೇಶಗಳ ಚಿತ್ರೀಕರಣ ಮಾತ್ರ ಬಾಕಿ ಉಳಿಸಿದ್ದು, ಅದನ್ನು ಸಧ್ಯದಲ್ಲಿಯೇ ಚಿತ್ರಿಸಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಚಿತ್ರಕ್ಕೆ ಡಾ|| ಮೋಹನ್‌ಕುಮಾರ್ ಪಿ.ಹೆಚ್.ಡಿ., ಸಂಭಾಷಣೆ, ಛಾಯಾಗ್ರಹಣ, ಸಂಕಲನ ಮಹೇಶ್, ಸಾಹಿತ್ಯ ಕಣಗಲ್ ಪುರುಷೋತ್ತಮ್ ಗೋಟೂರಿ, ನೃತ್ಯ ಮದನ್ ಹರಿಣಿ, ಕಲೆ ಏಳುಮಲೈ, ಸಂಗೀತ ರಾಜ್‌ಭರತ್ ದಕ್ಷಿಣಾ ಮೂರ್ತಿ, ಚಿತ್ರವನ್ನು ವಿ. ಸ್ವಾಮಿನಾಥನ್ ನಿರ್ದೇಶಿಸುತ್ತಿದ್ದಾರೆ.
ತಾರಾಗಣದಲ್ಲಿ ಸುದರ್ಶನ್, ಶ್ರೀಧರ್, ಸಂಜಯ್, ಶ್ರೀನಿವಾಸಮೂರ್ತಿ, ಬ್ರಹ್ಮಾವರ್, ನವೀನ್, ಮಾ|| ದರ್ಶನ್, ಮಾ|| ಕರಣ್, ಪ್ರೇಮಾ, ಸುಮಾ ರೈ, ವಿಕ್ರಮ್ ಉದಯ್‌ಕುಮಾರ್, ಸತ್ಯನಾರಾಯಣ್ ಹೈದರಾಬಾದ್, ಮಾಸ್ಟರ್‌ದೀಪಕ್, ಮುಂತಾದವರಿದ್ದು, ವಿನಾಯಕನ ಪಾತ್ರದಲ್ಲಿ ಮಾಸ್ಟರ್ ಅಶ್ವಿನ್ ಕಾಣಿಸಿಕೊಳ್ಳುತ್ತಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed